slider

Saturday, July 12, 2014

No i


Friday, May 3, 2013

ಕಾಂಗ್ರೆಸ್ಸಿನಿಂದ ಜೆಡಿಎಸ್ ಸೇರ್ಪಡೆ


 ಇಲ್ಲಿನ ೧೨ಮತ್ತು ೧೩ ನೇ ವಾರ್ಡಿನಲ್ಲಿ ಶುಕ್ರವಾರದಂದು ನಡೆದ ಜೆಡಿಎಸ್ ಅಭ್ಯರ್ಥಿ ಪ್ರದೀಪಗೌಡ ವಿ.ಮಾಲಿ ಪಾಟೀಲರ ಬಹಿರಂಗ ಪ್ರಚಾರದಲ್ಲಿ ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿ ವಿಭಾಗದ ಕಾರ್ಯದರ್ಶಿ ಹನುಮಂತಪ್ಪ ಮ್ಯಾಗಳಮನಿ, ಹಾಗೂ ಮುಸ್ಲೀಂ ಸಮಾಜದ ಹಿರಿಯ ಮುಖಂಡ ಡಾ.ಮಾಜೀದ್ ಖಾನ್ ಸೇರಿದಂತೆ ಅನೇಕರು ಅಧಿಕೃತವಾಗಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.



ಕೋರವರ ಸಮಾಜಕ್ಕೆ ಸಾಮಾಜಿಕ ಭದ್ರತೆ: ಗೆಜ್ಜಿ ಭರವಸೆ
ಕೊಪ್ಪಳ, ಮೇ.೦೩: ಕ್ಷೇತ್ರದಲ್ಲಿ ತಾವೇಲ್ಲಾ ಆಶೀರ್ವದಿಸಿ ಜೆಡಿಎಸ್ ಪಕವನ್ನು ಅಧಿಕಾರಕ್ಕೆ ತಂದಲ್ಲಿ ಕೋರವರ ಸಮಾಜಕ್ಕೆ ಸಾಮಾಜಿಕ ಭದ್ರತೆ ಕಲ್ಪಿಸಿಕೋಡಲಾಗುವುದು ಎಂದು ಜೆಡಿಎಸ್ ಪಕ್ಷದ ಮುಖಂಡ ಶಂಕರ ಗೆಜ್ಜಿ ಭರವಸೆ ನೀಡಿದರು.
ಅವರು ಶುಕ್ರವಾರ ಇಲ್ಲಿನ ಕೋರವರ ಓಣಿಯಲ್ಲಿ ಜೆಡಿಎಸ್ ಅಭ್ಯರ್ಥಿ ಪ್ರದೀಪಗೌಡ ವಿ.ಮಾಲಿ ಪಾಟೀಲರ ಬಹಿರಂಗ ಪ್ರಚಾರದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿ, ಸಮಾಜದ ಜನತೆ ಈಗ ಸ್ವಾವಲಂಬನೆಯ ಬದುಕು ಸಾಗಿಸುತ್ತಿದ್ದು ಉತ್ತಮ ಸ್ಥಿತಿಯಲ್ಲಿದೆ.  ಆದರೆ ಸರಕಾರ ಯಾವುದೇ ಸೌಲಭ್ಯ ದೊರೆಯದಾಗಿದ್ದು ಮುಂದೆ ಎಲ್ಲಾ ಸೌಲಭ್ಯ ಸೇರಿದಂತೆ ವಿಶೇಷ ಆಧ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೊಪ್ಪಳ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರದೀಪಗೌಡ ವಿ.ಮಾಲಿ ಪಾಟೀಲ್, ಪಕ್ಷದ ತಾಲೂಕಾಧ್ಯಕ್ಷ ಅಂದಪ್ಪ ಮರೆಬಾಳ, ಜೆಡಿಎಸ್ ಯುವಘಟಕದ ಜಿಲ್ಲಾಧ್ಯಕ್ಷ ಸಿ.ಹೆಚ್.ರಮೇಶ, ತಾಲೂಕಾಧ್ಯಕ್ಷ ಮಹಿಮೂದ್ ಹುಸೇನಿ, ಪಕ್ಷದ ಮುಖಂಡರಾದ ಎಂ.ಡಿ. ಹುಸೇನ್‌ಮಾಸ್ಟರ್, ಶಂಕರ ಗೆಜ್ಜಿ, ಎಸ್.ಸಿ. ಘಟಕದ ಜಿಲ್ಲಾಧ್ಯಕ್ಷ ಹನುಮೇಶ ಕಡೆಮನಿ, ಚನ್ನಪ್ಪ ಟೆಂಗಿನಕಾಯಿ ಸೇರಿದಂತೆ ಅನೇಕ ಮುಖಂಡರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು. 

Thursday, May 2, 2013

ಬಿಎಸ್‌ಆರ್ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆ



ಕುಮಾರಸ್ವಾಮಿಯವರ ತತ್ವ ಸಿದ್ಧಾಂತ ಮೆಚ್ಚಿ ಜೆಡಿಎಸ್‌ಗೆ ಸೇರ್ಪಡೆಯಾದೆ: ಶೀಲ್ಪಾ ಸುಗಮದವರ
ಕೊಪ್ಪಳ, ಮೇ.೦೨: ಜೆಡಿಎಸ್ ಪಕ್ಷದ ತತ್ವ ಸಿದ್ದಾಂತಗಳು ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಜನಪರ ಕಾರ್ಯ ಹಾಗೂ ಅಭಿವೃದ್ಧಿ ಯೋಜನೆಗಳನ್ನು ಮೆಚ್ಚಿ ಇಂದು ನಮ್ಮ ಬೆಂಬಲಿಗರೊಂದಿಗೆ ಬಿಎಸ್‌ಆರ್ ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿರುವದಾಗಿ ಶೀಲ್ಪಾ ಬಾಲಚಂದ್ರ ಸುಗಮದವರ ಹೇಳಿದರು.
ಅವರು ಗುರುವಾರ ನಗರದ ಒಂದನೇ ವಾಡಿನಲ್ಲಿ ಜೆಡಿಎಸ್ ಅಭ್ಯರ್ಥಿ ಪ್ರದೀಪಗೌಡ ವಿ. ಮಾಲಿ ಪಾಟೀಲ್ ರವರ ಬಹಿರಂಗ ಪ್ರಚಾರದಲ್ಲಿ ಅಭ್ಯರ್ಥಿಯ ಸಮ್ಮುಖದಲ್ಲಿ ಅಧಿಕೃತವಾಗಿ ಪಕ್ಷ ಸೇರ್ಪಡೆಗೊಂಡರು. ಶೀಲ್ಪಾ ಸುಗಮದವರ ಕಳೆದ ನಗರಸಭೆ ಚುನಾವಣೆಯಲ್ಲಿ ಒಂದನೇ ವಾರ್ಡಿನಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದು ಪರಾಭವಗೊಂಡಿದ್ದರು. ಜೆಡಿಎಸ್ ಸೇರ್ಪಡೆ ನಂತರ ಅವರು ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿ, ನಮ್ಮೇಲ್ಲಾ ಬೆಂಬಲಿಗರು ಹಾಗೂ ವಾರ್ಡಿನ ಸಮಸ್ಥ ಜನತೆ ಈ ಬಾರಿ ಜೆಡಿಎಸ್ ಅಭ್ಯರ್ಥಿ ಕವಲೂರುಗೌಡ್ರಗೆ ಬೆಂಬಲಿಸಿ ಅಭಿವೃದ್ಧಿ ಕಾರ್ಯಗಳನ್ನು ನಿಂತು ನೋಡಿರಿ. ಕ್ಷೇತ್ರದ ಅಭಿವೃದ್ಧಿ ಎಂದರೇ ಕವಲೂರಗೌಡ್ರ ಎಂಬಂತೆ ಮಾಡಿ ತೋರಲಿದ್ದಾರೆ ಎಂದು ಅವರಿಲ್ಲಿ ತಿಳಿಸಿದರು. 
ಇದೇ ವೇಳೆ ಜೆಡಿಎಸ್ ಹಿರಿಯ ಮುಖಂಡ ಎಂ.ಡಿ. ಹುಸೇ


ನ್‌ಮಾಸ್ಟರ್ ಮಾತನಾಡಿ, ಜೆಡಿಎಸ್ ಪಕ್ಷಕ್ಕೆ ತನ್ನದೇ ಆದ ಸೈದ್ಯಾಂತೀಕ ತತ್ವ ಸಿದ್ಧಾಂತಗಳಿವೆ. ಅದೇ ರೀತಿ ನಮ್ಮ ಪಕ್ಷದ ನಾಯಕರು ಮಹತ್ವ ಪೂರ್ಣ ಯೋಜನೆ ಹಾಗೂ ಉದ್ದೇಶಗಳು ಅಷ್ಟೋಂದು ಫಲಪ್ರದವಾಗಿರುತ್ತವೆ. ಅದೇ ರೀತಿ ನಮ್ಮ ಅಭ್ಯರ್ಥಿ ಕವಲೂರು ಗೌಡ್ರ ಅತ್ಯಂತ ಸರಳ, ಸಜ್ಜನಿಕೆಯ, ನಿಷ್ಟೆ, ಪ್ರಾಮಾಣಿಕ ವ್ಯಕ್ತಿಯಾಗಿದ್ದು ಜನತೆ ಇವರ ಬಗ್ಗೆ ಅರಿತು ಬಹುಮತ ನೀಡುವಂತೆ ಅವರಿಲ್ಲಿ ಮನವಿ ಮಾಡಿದರು. 

ನಗರದಲ್ಲಿ ಪ್ರಚಾರ : 
ಇಂದು ನಗರದ ಒಂದನೇ ವಾರ್ಡಿನ ಶಿರಸಪ್ಪಯ್ಯನ ಮಠದಲ್ಲಿ ಅಭ್ಯರ್ಥಿ ಪ್ರದೀಪಗೌಡ ವಿ.ಮಾಲಿ ಪಾಟೀಲ್ ವಿಶೇಷ ಪೂಜೆ ನೆರವೇರಿಸಿ ಒಂದನೇ ವಾರ್ಡಿನಿಂದ ನಗರದ ಬಹಿರಂಗ ಪ್ರಚಾರಕ್ಕೆ ಚಾಲನೆ ನೀಡಿದರು. 
ಈ ಸಂದರ್ಭದಲ್ಲಿ ಕೊಪ್ಪಳ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರದೀಪಗೌಡ ವಿ.ಮಾಲಿ ಪಾಟೀಲ್,ಜೆಡಿಎಸ್ ಯುವಘಟಕದ ಜಿಲ್ಲಾಧ್ಯಕ್ಷ ಸಿ.ಹೆಚ್.ರಮೇಶ, ಪಕ್ಷ ಮುಖಂಡರಾದ ಮಾಜಿ ಜಿ.ಪಂ. ಸದಸ್ಯ ಮೋತಿಲಾಲ್, ಜೆಡಿಎಸ್ ಎಸ್.ಟಿ. ಘಟಕದ ಜಿಲ್ಲಾಧ್ಯಕ್ಷ ಮಲ್ಲಪ್ಪ ಫ. ಬೇಲೇರಿ, ಟಿ.ಟಿ. ಪಾಟೀಲ್, ಚಂದ್ರಶೇಖರಗೌಡ್ರ ವಿ. ಪಾಟೀಲ್, ಮುಖಂಡರಾದ ಎಂ.ಡಿ. ಹುಸೇನ್‌ಮಾಸ್ಟರ್, ಎಸ್.ಸಿ. ಘಟಕದ ಜಿಲ್ಲಾಧ್ಯಕ್ಷ ಹನುಮೇಶ ಕಡೆಮನಿ, ಚನ್ನಪ್ಪ ಟೆಂಗಿನಕಾಯಿ ಸೇರಿದಂತೆ ಅನೇಕ ಮುಖಂಡರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

Wednesday, May 1, 2013

ಬಡವರ ಬೆವರು, ಕಾರ್ಮಿಕರ ರಕ್ತದಿಂದ ಹುಟ್ಟಿದ್ದು ಜೆಡಿಎಸ್ ಪಕ್ಷ: ರಮೇಶ ನಾಮಕಲ್


ಕೊಪ್ಪಳ, ಮೇ.೦೧: ಬಡವರ ಬೆವರು, ಕಾರ್ಮಿಕರ ರಕ್ತದಿಂದ ಹುಟ್ಟಿದ್ದೇ ನಮ್ಮ ಜೆಡಿಎಸ್ ಪಕ್ಷ ಹಾಗಾಗೀ ನಮ್ಮ ಪಕ್ಷದ ನಾಯಕರಿಗೆ ಬಡವರ, ಶ್ರಮಿಕರ, ಕಾರ್ಮಿಕರ ನಾಡಿಮಿಡಿತ ಗೊತ್ತಿದ್ದು ಜನಪರ ಯೋಜನೆಗಳನ್ನು ಅವರು ಜಾರಿಗೊಳಿಸಲಿದ್ದಾರೆ ಎಂದು ಜಿಲ್ಲಾ ಜೆಡಿಎಸ್ ಯುವ ಘಟಕದ ಅಧ್ಯಕ್ಷ ರಮೇಶ ನಾಮಕಲ್ ಭವಿಷ್ಯ ನುಡಿದರು. 
ಅವರು ಬುಧವಾರ ತಾಲೂಕಿನ ಬಸ್ಸಾಪುರ ಗ್ರಾಮದಲ್ಲಿ ನೆರೆದ ಯುವಜನತೆಯನ್ನುದ್ದೇಶಿಸಿ ಮಾತನಾಡಿ, ನಮ್ಮ ಪಕ್ಷದಲ್ಲಿ ಧೀಮಂತ ನಾಯಕರಿದ್ದು ಅವರೇಲ್ಲಾ ಬಡತನ, ಶ್ರಮೀಕ ಕುಟುಂಬದಿಂದ ಬಂದಿದ್ದು, ಬಡವರ, ಶ್ರಮೀಕ ಕಾರ್ಮಿಕರ ಪರವಾದ ಯೋಜನೆಗಳನ್ನು ಹಮ್ಮಿಕೊಳ್ಳಲಿದ್ದಾರೆ. ಯಾವುದೇ ಪಕ್ಷದ ಪ್ರಣಾಳಿಕೆಯಲ್ಲು ಇಲ್ಲದ ಅಭಿವೃದ್ಧಪರ ಯೋಜನೆಗಳು ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿವೆ ಎಂಬುದು ಈಡೀ ರಾಜ್ಯಕ್ಕೆ ಗೊತ್ತಾಗಿದೆ. ಇದನ್ನು ಜನತೆ ಅರಿತು ಜನತೆ ಜೆಡಿಎಸ್ ಪಕ್ಷದ ಅಭ್ಯರ್ಥಿ ಪ್ರದೀಪಗೌಡ ವಿ. ಮಾಲಿ ಪಾಟೀಲ್‌ರಿಗೆ ತಮ್ಮ ಅಮುಲ್ಯವಾದ ಮತ ನೀಡಿ ಪ್ರಚಂಡ ಬಹುಮತದಿಂದ ಜಯಶಾಲಿಗಳನ್ನಾಗಿಸಬೇಕೆಂದು ಅವರಿಲ್ಲಿ ಮನವಿ ಮಾಡಿದರು.
ನಂತರ ಮಾಜಿ ಜಿ.ಪಂ.ಸದಸ್ಯ ಮೋತಿಲಾಲ್ ಮಾತನಾಡಿ, ಕುಮಾರಣ್ಣ ಪ್ರಣಾಳಿಕೆಯಲ್ಲಿರುವ ಅಧಿಕಾರ ದೊರೆತ ೨೪ ಗಂಟೆಗಳಲ್ಲಿ ಎಲ್ಲಾ ಬಾಂಕ್‌ಗಳಲ್ಲಿನ ಸಾಲಮನ್ನಾ, ಮಾಶಾಸನ ಹೆಚ್ಚಳ, ಗರ್ಭೀಣಿಯರಿಗೆ ಐದು ಸಾವಿರ ಧನ ಸಹಾಯ ನೀಡುವುದು ಸೇರಿದಂತೆ ಅನೇಕ ಯೋಜನೆಗಳು ಜಾರಿಯಾಗಲಿವೆ. ಅದಕ್ಕಾಗಿ ಜನತೆ ಜ್ಯಾತ್ಯಾತೀತ ಜನತಾದಳಕ್ಕೆ ಬೆಂಬಲಿಸುವಂತೆ ಅವರಿಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕೊಪ್ಪಳ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರದೀಪಗೌಡ ವಿ.ಮಾಲಿ ಪಾಟೀಲ್, ಪಕ್ಷ ಮುಖಂಡರಾದ ಮಾಜಿ ಜಿ.ಪಂ. ಸದಸ್ಯ ಮೋತಿಲಾಲ್, ಜೆಡಿಎಸ್ ಎಸ್.ಟಿ. ಘಟಕದ ಜಿಲ್ಲಾಧ್ಯಕ್ಷ ಮಲ್ಲಪ್ಪ ಫ. ಬೇಲೇರಿ, ತಾಲೂಕ ಕಾರ್ಯದರ್ಶಿ ಶೇಖಪ್ಪ ಲಕ್ಷಾಣಿ, ಟಿ.ಟಿ. ಪಾಟೀಲ್, ಚಂದ್ರಶೇಖರಗೌಡ್ರ ವಿ. ಪಾಟೀಲ್, ಮುಖಂಡರಾದ ಎಂ.ಡಿ. ಹುಸೇನ್‌ಮಾಸ್ಟರ್, ಎಸ್.ಸಿ. ಘಟಕದ ಜಿಲ್ಲಾಧ್ಯಕ್ಷ ಹನುಮೇಶ ಕಡೆಮನಿ, ತಾಲೂಕಾಧ್ಯಕ್ಷ ರಮೇಶ ಬೇಳೂರು, ವಿರುಪಾಕ್ಷಗೌಡ, ಕಳಕನಗೌಡ ಹಲಗೇರಿ, ರಮೇಶ ಹದ್ಲಿ, ಸೋಮಶೇಖರ, ಮಲ್ಲಿಕಾರ್ಜುನ ಶೆಟ್ಟಿ, ದೇವಪ್ಪ, ಹೊಸ ಬಂಡಿಹರ್ಲಾಪುರ ಕಾಶಮ್ಮ ಹಿಟ್ನಾಳ, ಎಮ್.ರಮಣ, ಆದಂ ಶಫೀ, ಚಂದ್ರಮೋಹನ್  ಸೇರಿದಂತೆ ಇತರರು ಉಪಸ್ಥಿತರಿದ್ದರು. 

ಜೆಡಿಎಸ್‌ಗೆ ಜನಮತ ದೊರೆತಿದ್ದು ಗೌಡ್ರ ಗೆಲುವು ನಿಶ್ಚಿತ: ರಮೇಶ ನಾಮಕಲ್



ಕೊಪ್ಪಳ, ಮೇ.೦೧: ನಮ್ಮ ಜೆಡಿಎಸ್ ಅಭ್ಯರ್ಥಿ ಕವಲೂರ ಗೌಡ್ರಗೆ ಕ್ಷೇತ್ರದ ತುಂಬೆಲ್ಲಾ ಜನಮತ ದೊರೆತಿದ್ದು ಗೌಡ್ರ ಗೆಲುವು ಖಚಿತವೆಂದು ಜಿಲ್ಲಾ ಜೆಡಿಎಸ್ ಯುವ ಘಟಕದ ಅಧ್ಯಕ್ಷ ರಮೇಶ ನಾಮಕಲ್ ಭವಿಷ್ಯ ನುಡಿದರು. 
ಅವರು ಬುಧವಾರ ತಾಲೂಕಿನ ಕಾಸನಕಂಡಿ ಗ್ರಾಮದಲ್ಲಿ ನೆರೆದ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿ, ಪ್ರದೀಪಗೌಡ್ರ ಸರಳ ಸಜ್ಜನಿಕೆಗೆ ಕ್ಷೇತ್ರದಲ್ಲಿ ಉತ್ತಮ ಅನುಕಂಪ ಹಾಗೂ ಅವರ ಕಿಲ್ಲೆದರ್ ಮನೆತನ ಕುರಿತು ಜನತೆಗೆ ಗೊತ್ತಿದೆ ಇದರಿಂದ ಕ್ಷೇತ್ರದಲ್ಲಿ ನಿರೀಕ್ಷೆಗೂ ಮಿರಿ ಬಹುಮತ ಪಡೆಯುವ ಮೂಲಕ ಜಯ ಸಾಧಿಸಲಿದೆ. ಕುಮಾರಣ್ಣ ಪ್ರಣಾಳಿಕೆಯಲ್ಲಿರುವ ಅಧಿಕಾರ ದೊರೆತ ೨೪ ಗಂಟೆಗಳಲ್ಲಿ ಎಲ್ಲಾ ಬಾಂಕ್‌ಗಳಲ್ಲಿನ ಸಾಲಮನ್ನಾ ಸೇರಿದಂತೆ, ಮಾಶಾಸನ ಹೆಚ್ಚಳ, ಗರ್ಭೀಣಿಯರಿಗೆ ಐದು ಸಾವಿರ ಧನ ಸಹಾಯ ನೀಡುವುದು ಸೇರಿದಂತೆ ಅನೇಕ ಯೋಜನೆಗಳು ಜಾರಿಯಾಗಲಿ ಅದಕ್ಕಾಗಿ ಜನತೆ ಜ್ಯಾತ್ಯಾತೀತ ಜನತಾದಳಕ್ಕೆ ಬಾರಿ ಪ್ರಮಾಣದಲ್ಲಿ ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಜೆಡಿಎಸ್ ತಾಲೂಕ ಕಾರ್ಯದರ್ಶಿ ಶೇಖಣ್ಣ ಲಕ್ಷಾಣಿ ಮಾತನಾಡಿ, ಕುಮಾರಸ್ವಾಮಿಯವರ ಜನಪರ ಕಾರ್ಯಗಳನ್ನು ನಮ್ಮ ಗೌಡರು ತಮ್ಮ ಮನೆ ಮನೆ ಬಾಗಿಲಿಗೆ ತಂದು ತಲುಪಿಸಲಿದ್ದಾರೆ ಎಂದು ತಿಳಿಸಿದರು.
 ಈ ಸಂದರ್ಭದಲ್ಲಿ ಕೊಪ್ಪಳ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರದೀಪಗೌಡ ವಿ.ಮಾಲಿ ಪಾಟೀಲ್, ಪಕ್ಷ ಮುಖಂಡರಾದ ಮಾಜಿ ಜಿ.ಪಂ. ಸದಸ್ಯ ಮೋತಿಲಾಲ್, ಜೆಡಿಎಸ್ ಎಸ್.ಟಿ. ಘಟಕದ ಜಿಲ್ಲಾಧ್ಯಕ್ಷ ಮಲ್ಲಪ್ಪ ಫ. ಬೇಲೇರಿ, ಟಿ.ಟಿ. ಪಾಟೀಲ್, ಚಂದ್ರಶೇಖರಗೌಡ್ರ ವಿ. ಪಾಟೀಲ್, ಮುಖಂಡರಾದ ಎಂ.ಡಿ. ಹುಸೇನ್‌ಮಾಸ್ಟರ್, ಎಸ್.ಸಿ. ಘಟಕದ ಜಿಲ್ಲಾಧ್ಯಕ್ಷ ಹನುಮೇಶ ಕಡೆಮನಿ, ತಾಲೂಕಾಧ್ಯಕ್ಷ ರಮೇಶ ಬೇಳೂರು, ವಿರುಪಾಕ್ಷಗೌಡ, ಕಳಕನಗೌಡ ಹಲಗೇರಿ, ರಮೇಶ ಹದ್ಲಿ, ಸೋಮಶೇಖರ, ಮಲ್ಲಿಕಾರ್ಜುನ ಶೆಟ್ಟಿ, ಸೋಮಶೇಖರ, ದೇವಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tuesday, April 30, 2013

ಜೆಡಿಎಸ್‌ನ ಬೃಹತ್ ರೋಡ್ ಶೋ



ತಾಲೂಕಿನ ಮುನಿರಾಬಾದ್ ಗ್ರಾಮದ ಜಾಮೀಯಾ ಮಸೀದಿ ಮುಖ್ಯರಸ್ತೆಯಲ್ಲಿ ಮಂಗಳವಾರ ಜೆಡಿಎಸ್‌ನ ಬೃಹತ್ ರೋಡ್ ಶೋ ಮೂಲಕ ಬಹಿರಂಗ ಪ್ರಚಾರ ನಡೆಸಲಾಯಿತು.
ಕೊಪ್ಪಳ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರದೀಪಗೌಡ ವಿ.ಮಾಲಿ ಪಾಟೀಲ್, ಪಕ್ಷ ಮುಖಂಡರಾದ ಮಾಜಿ ಜಿ.ಪಂ. ಸದಸ್ಯ ಮೋತಿಲಾಲ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ಸಿ.ಹೆಚ್. ರಮೇಶ, ಜೆಡಿಎಸ್ ಎಸ್.ಟಿ. ಘಟಕದ ಜಿಲ್ಲಾಧ್ಯಕ್ಷ ಮಲ್ಲಪ್ಪ ಫ. ಬೇಲೇರಿ, ಟಿ.ಟಿ. ಪಾಟೀಲ್, ಮುಖಂಡರಾದ ಎಂ.ಡಿ. ಹುಸೇನ್‌ಮಾಸ್ಟರ್, ಎಸ್.
ಸಿ. ಘಟಕದ ಜಿಲ್ಲಾಧ್ಯಕ್ಷ ಹನುಮೇಶ ಕಡೆಮನಿ, ತಾಲೂಕಾಧ್ಯಕ್ಷ ರಮೇಶ ಬೇಳೂರು, ರಮೇಶ ಹದ್ಲಿ, ಸ್ಥಳೀಯ ಮುಖಂಡರಾದ ಪ್ರದೀಪಕುಮಾರ, ಸುರೇಂದ್ರ, ನರಸಾರೆಡ್ಡಿ, ಮುನಿರ್ ಹೈಮದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಲೂಟಿ, ಭ್ರಷ್ಟಾಚಾರವೇ ಕಾಂಗ್ರೆಸ್ ಮತ್ತು ಬಿಜೆಪಿ ಕೊಡುಗೆ :ಮೋತಿಲಾಲ್


ಕೊಪ್ಪಳ, ಏ.೩೦: ಕೇಂದ್ರದಲ್ಲಿ ಕಾಂಗ್ರೆಸ್ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರ ಬಾರಿ ಭ್ರಷ್ಟಾಚಾರ ಲೂಟಿ ನಡೆಸಿರುವುದೇ ಜನತೆಗೆ ನೀಡಿದ ಕೊಡುಗೆಯಾಗಿದೆ ಎಂದು ಮಾಜಿ ಜಿ.ಪಂ. ಸದಸ್ಯ ಮೋತಿಲಾಲ್ ಕಿಡಿಕಾರಿದರು.
ಅವರು ಮಂಗಳವಾರ ತಾಲೂಕಿನ ಹೀರೆ ಕಾಸನಕಂಡಿ ಗ್ರಾಮದ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿ, ಇಗಾಗಲೇ ಹಲವು ಸಚಿವರು, ಶಾಸಕರು ಜೈಲಿಗೆ ಹೋಗಿಬಂದಿದ್ದಾರೆ ಅದೇ ರೀತಿ ಇನ್ನು ಕೋಟ್ ಕಟಕಟೆಯ
ಲ್ಲಿ ನಿಂತವರು ಇದ್ದಾರೆ. ಜನತೆ ಇನ್ನಾದರು ಎಚ್ಛೆತ್ತು ಯೋಗ್ಯ ಅಭ್ಯರ್ಥಿ ಅದು ನಮ್ಮ ಜೆಡಿಎಸ್ ಅಭ್ಯರ್ಥಿ ಪ್ರದೀಪಗೌಡ ಮಾಲಿ ಪಾಟೀಲ್ ಕವಲೂರಗೌಡ್ರ ಸರಳ ಸಜ್ಜನಿಕೆ ವ್ಯಕ್ತಿಯಾಗಿದ್ದು ಅವರಿಗೆ ತಮ್ಮ ಮಿಸಲಾಗಿರಲಿ ಎಂದು ಅವರಿಲ್ಲಿ ಮನವಿ ನೀಡಿದರು.
ನಂತರ ಎಸ್.ಸಿ. ಘಟಕದ ಜಿಲ್ಲಾಧ್ಯಕ್ಷ ಹನುಮೇಶ ಕಡೆಮನಿ ಮಾತನಾಡಿ, ಜನತೆ ಜಾತಿ ಭೇದ ಮಾಡದೇ ಜ್ಯಾತ್ಯಾತೀತವಾಗಿ ಜೆಡಿಎಸ್‌ಗೆ ಬೆಂಬಲಿಸಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಕ್ಷ ಮುಖಂಡರಾದ ಜೆಡಿಎಸ್ ಯುವ ಘಟಕ ಜಿಲ್ಲಾಧ್ಯಕ್ಷ ಸಿ.ಹೆಚ್. ರಮೇಶ, ತಾಲೂಕ ಘಟಕದ ಕಾರ್ಯದರ್ಶಿ ಕಳಕನಗೌಡ ಹಲಗೇರಿ, ಎಸ್.ಟಿ. ಘಟಕದ ಜಿಲ್ಲಾಧ್ಯಕ್ಷ ಮಲ್ಲಪ್ಪ ಫ. ಬೇಲೇರಿ, ಟಿ.ಟಿ. ಪಾಟೀಲ್, ಮುಖಂಡರಾದ ಎಂ.ಡಿ. ಹುಸೇನ್‌ಮಾಸ್ಟರ್, ಜೆಡಿಎಸ್ ತಾಲೂಕ ಕಾರ್ಯದರ್ಶಿ ಶೇಖಪ್ಪ ಲಕ್ಷಾಣಿ, ಕರವೇ ತಾಲೂಕಾಧ್ಯಕ್ಷ ವಿಜಯಕುಮಾರ,  ಪಕ್ಷದ ಎಸ್‌ಸಿ ಘಟಕದ ತಾಲೂಕಾಧ್ಯಕ್ಷ ರಮೇಶ ಬೇಳೂರು, ವಿರುಪಾಕ್ಷಗೌಡ, ರಮೇಶ ಹದ್ಲಿ, ಸೋಮಶೇಖರ, ದೇವಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.